Friday, January 17, 2014
ಆಸ್ಪದವೇ ಇಲ್ಲ...!
ಕಣ್ಣುಗಳ ಜೊತೆ ರೆಪ್ಪೆಗಳಿರುವಾಗ ಹೊನ್ನೋಟಕ್ಕೆ ಕೊರತೆ ಇದೆಯೇ?
ಕಂದನ ಜೊತೆ ಮಾತೆ ಇರುವಾಗ ಮಮತೆಗೆ ಮರೆವಿದೆಯೆ?
ಧನಂಜಯನ ಜೊತೆ ತ್ರಿವಿಕ್ರಮನಿರುವಾಗ ಸೋಲಿನ ಸುಳಿವಿದೆಯೇ?
ಅಂಧಕಾರದ ಜೊತೆ ಭಾಸ್ಕರನಿರುವಾಗ ಸುಪ್ರಭಾತಕ್ಕೆ ಸುಂಕವಿದೆಯೆ?
ತುಟಿಗಳ ಜೊತೆ ನಗುವಿರುವಾಗ ನೋವಿಗೆ ಆಸ್ಪದವೇ?
ಪರಿಶ್ರಮದ ಜೊತೆ ಆತ್ಮ ವಿಶ್ವಾಸವಿರುವಾಗ ಯಶಸ್ಸಿಗೆ ಕೊನೆಇದೆಯೆ?
ಕನ್ನಡ ಕಣ್ಮಣಿಗಳ ಜ್ಞಾನಪೀಠವೆ ಕರುನಾಡಲ್ಲಿರುವಾಗ ಸಾಹಿತ್ಯಕ್ಕೆ ಸರಿಸಾಟಿ ಇದೆಯೇ?
ವರುಣ - ಧರಿತ್ರಿಯರ ಸಂಗಮವಿರುವತನಕ ವನರಾಶಿಗಳ ಹಚ್ಚ ಹಸಿರಿಗೆ ಬರವಿದೆಯೆ?
ಎಂದು ಎಂದೆಂದೂ ವಾಸ್ತ್ಸಲ್ಯ ಭರಿತ ಸೂಳ್ನುಡಿಗಳನ್ನಾಡಿ ಭರವಸೆಯ ಹೊಳೆಯರಿಸಿ ಮರೀಚಿಕೆಯಾದ ಯಶಸನ್ನು ಮರುಭೂಮಿಯಲ್ಲಿ ಓಯಸಿಸ್ ಅಂತೆ ಚಿಮ್ಮುಸುವ ಸಾಧನ ಸಹನಾಮೂರ್ತಿ ಇರುವಾಗ
ಜೀವನದಲ್ಲಿ ನಿರಾಶವಾದಕ್ಕೆ ನೆನಪಾಗುವುದೇ?
Subscribe to:
Post Comments (Atom)
No comments:
Post a Comment